12-05-2022 ರ ಗುರುವಾರ ಬೆಳಿಗ್ಗೆ: 8.30 ರಿಂದ 9.45 ಗಂಟೆವರೆಗೆ ವಾರ್ಡ್ ಸಂ-18 ರ ಯಾದವಗಿರಿ, ಮೇದರ್ಸ ಬ್ಲಾಕ್, ಮಂಜುನಾಥಪುರ ಬಡಾವಣೆ ಪ್ರದೇಶಗಳಲ್ಲಿ ಶ್ರೀ ಎಲ್.ನಾಗೇಂದ್ರ, ಮಾನ್ಯ ಶಾಸಕರು, ಚಾಮರಾಜ ವಿಧಾನ ಸಭಾ ಕ್ಷೇತ್ರ, ಮೈಸೂರು ರವರು ವಾರ್ಡ್ ಸಂ-18 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಬಿ.ವಿ.ರವೀಂದ್ರರವರು ಹಾಗೂ ಮೈಸೂರು ಮಹಾನಗರಪಾಲಿಕೆಯ ಆಯುಕ್ತರಾದ ಶ್ರೀ ಲಕ್ಷ್ಮೀಕಾಂತರೆಡ್ಡಿ, ಐ.ಎ.ಎಸ್, ರವರೊಂದಿಗೆ* ಮೇದರ್ಸ ಬ್ಲಾಕ್ 2ನೇ ಮುಖ್ಯರಸ್ತೆಯಲ್ಲಿ ನಗರಪಾಲಿಕೆಯ ಅನುದಾನ ರೂ.25.00 ಲಕ್ಷ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ, ಮೇದರ್ಸ ಬ್ಲಾಕ್ 3ನೇ ಮುಖ್ಯರಸ್ತೆಯಲ್ಲಿ ರೈಲ್ವೆ ಹಳಿಯ ಅಕ್ಕಪಕ್ಕದ ಪ್ರದೇಶದ ಡಬ್ರೀಸ್ ತೆರವು & ಸ್ವಚ್ಚತಾ ಕಾರ್ಯಕಾಮಗಾರಿಗೆ ಮಹಾನಗರಪಾಲಿಕೆಯ ಅನುದಾನ ರೂ.20.00 ಲಕ್ಷದ ಕಾಮಗಾರಿ, ಮಂಜುನಾಥಪುರ ಬೋವಿ ಸಮಾಜದ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ರೂ.10.00 ಲಕ್ಷದ ಕಾಮಗಾರಿ, ಮಂಜುನಾಥಪುರ ಮುಖ್ಯರಸ್ತೆಯಿಂದ ಕೆಂಪೇಗೌಡ ಕಲ್ಯಾಣ ಮಂಟಪದ ವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅನುದಾನ ರೂ.1.00 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿ, ಯಾದವಗಿರಿ ಆಕಾಶವಾಣಿ ವೃತ್ತದಿಂದ ಯಾದವಗಿರಿಯ ಎಲ್ಲಾ ರಸ್ತೆಗಳ ಮರು ಡಾಂಬರೀಕರಣ & ಯು.ಜಿ.ಡಿ ಕಾಮಗಾರಿಯನ್ನು ಮಹಾನಗರ ಪಾಲಿಕೆ ಅನುದಾನ ಒಟ್ಟು ರೂ.37.00 ಲಕ್ಷದ ಕಾಮಗಾರಿ ಹೀಗೆ *ಒಟ್ಟಾರೆ ಅಭಿವೃದ್ದಿ ಕಾಮಗಾರಿಗಳಿಗೆ ಮಹಾನಗರಪಾಲಿಕೆಯ ಅನುದಾನ ಒಟ್ಟು ರೂ. 156.54 ಲಕ್ಷ ಹಾಗೂ ಶಾಸಕರ ವಿವೇಚನಾ ಅನುದಾನ ಒಟ್ಟು ರೂ. 110.00 ಲಕ್ಷದ ಒಟ್ಟಾರೆ ರೂ: 266.54 ಲಕ್ಷದ* ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಚಾಮರಾಜ ಆಶ್ರಯಸಮಿತಿ ಸದಸ್ಯ ಮಹೇಶ್, ಬಿ.ಎಲ್.ಎ-1 ದಿನೇಶ್ ಗೌಡ, ಮುಖಂಡರುಗಳಾದ ಷಣ್ಮುಗಂ, ರಾಮಣ್ಣ, ಗಿರೀಶ್, ಮಹೇಶ್, ಮುರುಗೇಶ್, ವೆಂಕಟರಾಮು, ಹರೀಶ್, ನಾರಾಯಣ, ಶ್ರೀನಿವಾಸ್, ಸುಬ್ರಮಣ್ಯಂ, ನಾಗೇಶ್, ಸ��.ವಿ.ನಾಗರಾಜು, ಕವಿತ, ರೂಪ, ಶಶಿಕಲಾ, ಗಾಯತ್ರಿ ಮುಂತಾದವರು ಹಾಜರಿದ್ದರು.
ಅಧಿಕಾರಿಗಳಾದ ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಮಹೇಶ್, ಕಾರ್ಯಪಾಲಕ ಇಂಜಿನಿಯರ್ ಶ್ರೀಮತಿ ಸಿಂಧು, ವಲಯಕಚೇರಿ ಸಹಾಯಕ ಆಯುಕ್ತರಾದ ಶ್ರೀಮತಿ: ಚಂದ್ರಮ್ಮ, ಸ.ಕಾ.ಪಾ ಇಂಜಿನಿಯರ್ ಮಧುಕರ್, ಅಭಿವೃದ್ದಿ ಅಧಿಕಾರಿ ಹೇಗಾನಂದ, ಇಂಜಿನಿಯರ್ ರಾಮಣ್ಣ, ಕೆ.ಆರ್.ಐ.ಡಿ.ಎಲ್ ಇಂಜಿನಿಯರ್ ಅರ್ಚನ, ವಿವೇಕ್, ಗುತ್ತಿಗೆದಾರರಾದ ಹರೀಶ್, ಪಿ.ಕೆ.ಕೃಷ್ಣರಾಜು, ಮುಂತಾದವರು ಹಾಜರಿದ್ದರು.